in the future - u will be able to do some more stuff here,,,!! like pat catgirl- i mean um yeah... for now u can only see others's posts :c
✨ಸಂತೋಷ, ಸಂತೃಪ್ತಿ ಹಾಗೂ ಧನ್ಯತೆಯ ಕ್ಷಣ🙏🏽
ಭಗವಂತ, ಗುರುಗಳು ಹಾಗೂ ಹಿರಿಯರ ಆಶೀರ್ವಾದದಿಂದ 37ನೇ ವರ್ಷದ ಮಂತ್ರಾಲಯ ಪಾದಯಾತ್ರೆ ಆನಂದದಾಯಕವಾಗಿ ಪೂರ್ಣಗೊಂಡಿತು. ಭಗವಂತನ ಆರಾಧನೆಗೆ ಮತ್ತಷ್ಟು ಶಕ್ತಿ ದೊರೆಯಲಿ, ಜೀವನವೆಲ್ಲ ಭಕ್ತಿಯಿಂದ ಕೂಡಿರಲಿ ಎಂಬುದೊಂದೆ ಕೋರಿಕೆ ಗುರುಗಳಲ್ಲಿ. ನಮ್ಮೆಲ್ಲರ ಮೇಲೆ ಶ್ರೀ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಸದಾ ಇರಲಿ.
ಜೈ ಶ್ರೀರಾಮ
ಜೈ ಹನುಮಾನ
15 - 2
ತಾಂತ್ರಿಕ ಕಾರಣಗಳಿಂದ ಇಂದಿನ ಸಂಚಿಕೆ ಅಪ್ಲೋಡ್ ಮಾಡಲು ತಡವಾಗಿದೆ. ಆದಷ್ಟು ಬೇಗ ಅಪ್ಲೋಡ್ ಮಾಡಲಾಗುವುದು. ತೊಂದರೆಗಾಗಿ ಕ್ಷಮೆ ಕೋರುತ್ತೇವೆ.
2 - 0
ಮುಖ್ಯಪ್ರಾಣ ಬಂದ ಮನೆಗೆ ಕಾರ್ಯಕ್ರಮದ ಎಲ್ಲ ವೀಕ್ಷಕರಿಗೂ ಹನುಮ ಜಯಂತಿಯ ಶುಭಾಶಯಗಳು. ನಮ್ಮ ಇಷ್ಟದೈವ ಹನುಮಂತ ಎಲ್ಲರಿಗೂ ಆಶೀರ್ವಾದ, ಸುಖ, ಶಾಂತಿ, ಹಾಗೂ ನೆಮ್ಮದಿ ನೀಡಲಿ ಎಂದುಪ್ರಾರ್ಥಿಸುತ್ತೇನೆ.
20 - 4
ಕುಲದೇವತೆ ತಾಯಿ ಬನಶಂಕರಿಯ ಅನುಗ್ರಹದಿಂದ, ಹರಿ ವಾಯು ಗುರುಗಳ ಕೃಪಾಶೀರ್ವಾದದಿಂದ, ಎಲ್ಲ ಹಿರಿಯರ ಆಶೀರ್ವಾದದಿಂದ, ಕಿರಿಯರ ಶುಭ ಹಾರೈಕೆಯ ಫಲವಾಗಿ, ಈ ಬಾರಿ 35 ನೇ ವರ್ಷದ ಮಂತ್ರಾಲಯ ಪಾದಯಾತ್ರೆಯನ್ನು ಸಂಪೂರ್ಣಗೊಳಿಸಿದೆ.
ತಮ್ಮೆಲ್ಲರ ಬೆಂಬಲ ಹಾಗೂ ಶುಭ ಸದಾ ನಮ್ಮೊಂದಿಗಿರಲಿ.
ತುಂಬು ಹೃದಯದ ಧನ್ಯವಾದಗಳು 🙏
23 - 5
ಮುಖ್ಯಪ್ರಾಣ ಬಂದ ಮನೆಗೆ ಕಾರ್ಯಕ್ರಮದ ಎಲ್ಲಾ ವೀಕ್ಷಕರಿಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಬೆಳಕಿನ ಹಬ್ಬ ನಿಮ್ಮ ಬಾಳಿನಲ್ಲಿ ಸುಖ ಸಂತೋಷ ಸಮೃದ್ಧಿ ಹಾಗೂ ಶಾಂತಿಯನ್ನು ತರಲಿ ಎಂದು ಹಾರೈಸುತ್ತೇವೆ.
ನಿಮ್ಮ ಪ್ರೋತ್ಸಾಹ ಸದಾ ಕಾಲ ನಮ್ಮೊಂದಿಗೆ ಇರಲಿ ಎಂದು ಕೋರುತ್ತೇವೆ.
10 - 0
ನವರಾತ್ರಿ ಒಂಬತ್ತನೇ ದಿನದ ಅವತಾರ ದೇವಿ ಸಿದ್ಧಿರಾತ್ರಿ. ಸಕಲ ಸುದ್ದಿಗಳ ಅಧಿದೇವತೆ ಆಶೀರ್ವಾದ ಮಾಡಿ, ಸುಖ ಶಾಂತಿ ನೀಡಲಿ.
9 - 0
ನವರಾತ್ರಿಯ ಎಂಟನೇ ದಿನದ ಅವತಾರ ದೇವಿ ಮಹಾಗೌರಿ. ನಮ್ಮ ಎಲ್ಲ ಆಕಾಂಕ್ಷೆಗಳನ್ನು ಹಾಗೂ ಕನಸುಗಳನ್ನು ಪೂರ್ತಿಗೊಳಿಸುವ ಶಕ್ತಿ ಹೊಂದಿರುವ ತಾಯಿ ಆಶೀರ್ವಾದ ಮಾಡಿ, ಸುಖ, ಸಮೃದ್ಧಿ ಮತ್ತು ಶಾಂತಿ ನೀಡಲಿ.
8 - 0
ನವರಾತ್ರಿ ಏಳನೇ ದಿನದ ಅವತಾರ ದೇವಿ ಕಾಳರಾತ್ರಿ. ರಕ್ತ ಬೀಜಾಸುರನನ್ನು ವಧೆ ಮಾಡಿದ ತಾಯಿ ನಮ್ಮೆಲ್ಲರ ಸಂಕಷ್ಟಗಳನ್ನು ಪರಿಹರಿಸಿ ಆಶೀರ್ವದಿಸಲಿ.
5 - 0
ನವರಾತ್ರಿಯ ಆರನೇ ದಿನದ ಅವತಾರ ದೇವಿ ಕಾತ್ಯಾಯಿನಿ. ಮಹಿಷಾಸುರನನ್ನು ವಧೆ ಮಾಡಿದ ತಾಯಿ ನಮ್ಮ ಜೀವನದಲ್ಲಿಯ ಕಷ್ಟಗಳನ್ನು ದೂರಗೊಳಿಸಿ ನೆಮ್ಮದಿ ನೀಡಲಿ.
7 - 0
ದೈವ ಭಕ್ತರಾದ ಅಶೋಕ್ ಜೋಶಿಯವರು ವೃತ್ತಿಯಿಂದ ಇಂಜಿನಿಯರ್ ಹಾಗು ಪ್ರವೃತ್ತಿಯಿಂದ ಕಲಾವಿದರು. ಹನುಮಂತ ದೇವರ ಬಗ್ಗೆ ವಿಶೇಷ ಭಕ್ತಿ ಹೊಂದಿದ್ದು ಕಳೆದ ಹಲವು ವರ್ಷಗಳಿಂದ ವಿವಿಧ ಹನುಮಂತದ ದೇವರ ದೇವಸ್ಥಾನಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅದನ್ನು ಇತರ ಭಕ್ತರೊಂದಿಗೆ ಹಂಚಿಕೊಳ್ಳಲು ಈ ಚಾನೆಲ್ ಆರಂಭಿಸಿದ್ದಾರೆ.
ಪರಿಚಯ
22 ವರ್ಷ ಪಿ ಡಬ್ಲ್ಯು ಡಿಯಲ್ಲಿ ಸೇವೆ ಸಲ್ಲಿಸಿ, ಕಲಾ ಜೀವನ ಹಾಗೂ ತಮ್ಮ ಇತರ ಆಸಕ್ತಿಗಳಾದ ಶಿಕ್ಷಣ, ವ್ಯಂಗ್ಯಚಿತ್ರ, ಪತ್ರಿಕೋದ್ಯಮದಲ್ಲಿ ತೊಡಗಿಕೊಳ್ಳಲು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಇಲ್ಲಿಯವರೆಗೂ 50ಕ್ಕು ಹೆಚ್ಚು ನಾಟಕಳಲ್ಲಿ ಅಭಿನಯಿಸಿದ್ದಾರೆ. ಮಕ್ಕಳ ಕಥೆ ಹೇಳುವುದರಲ್ಲಿ ವಿಶೇಷ ಆಸಕ್ತಿ ಹೊಂದಿದ್ದು ಮಕ್ಕಳ ಶಿಬಿರಗಳಲ್ಲಿ ಕಥೆ ಹೇಳಿದ್ದಾರೆ. 2000ಕ್ಕು ಹೆಚ್ಚು ವ್ಯಂಗ್ಯಚಿತ್ರಗಳು ಮತ್ತು ಹಲವಾರು ಲೇಖನಗಳು ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಶಿಕ್ಷಣ ನೀಡುವುದಷ್ಟೇ ಅಲ್ಲದೇ ಶಿಕ್ಷಣ ಪಡೆಯುವದರಲ್ಲಿಯು ಆಸಕ್ತಿ ಹೊಂದಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಪಡೆದಿದ್ದು, ಸಂಗೀತದಲ್ಲಿ ಪದವಿ, ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಸ್ನಾತಕೋತ್ತರ ಪದವಿ, ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೋಮಾ, ಮಲ್ಟಿ ಮೀಡಿಯಾದಲ್ಲಿ ಪ್ರಫಿಶಿಯನ್ಸಿ ಕೋರ್ಸ್ ಗಳನ್ನು ಪೂರೈಸಿದ್ದಾರೆ. ಪ್ರಸಕ್ತ ಮನೋ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ.